Friday, December 11, 2009

ಭೂಮಿನ್ ತಬ್ಬಿದ್ ಮೋಡಿದ್ದಂಗೆ...ಮಡಿಕೇರಿಲಿ ಮಂಜು.



ಬೆಂಗಳೂರಿಂದ ಮಡಿಕೇರಿಗೆ .

ಬೆಂಗಳೂರು-ನಾಗರಹೊಳೆ-ಹುಣುಸೂರು ( ಹುನುಸೂರಿಂದ 10 km ದೂರದಲ್ಲಿದ್ದ lodge ನಲ್ಲಿ ರಾತ್ರಿ halt)
ನಂತರ.....
ಮುಂಜಾನೆಯ ಮಂಜಿನಲ್ಲಿ ಬೈಕ್ ನುಗ್ಗಿಸಿಕೊಂಡು ಕುಶಾಲನಗರಕ್ಕೆ.......ಅಲ್ಲಿ ತಿಂಡಿ ಮುಗಿಸಿಕೊಳ್ಳುವಷ್ಟರಲ್ಲಿ ಸ್ವಲ್ಪ ಬಿಸಿಲು.
ಅಲ್ಲಿಂದ ' ಅಬ್ಬಿ ಜಲಪಾತ'- ಮಡಿಕೇರಿಯ ಬೀದಿಗಳಲ್ಲಿ ಒಂದು ರೌಂಡ್(licence ಇಲ್ಲದೆ ಇದ್ದಿದ್ದಕ್ಕೆ ಮಡಿಕೇರಿಯ ಪೊಲೀಸರಿಗೆ ಕೈ ಬಿಸಿ ಮಾಡಬೇಕಾಯಿತು) - ಅಲ್ಲಿಂದ ಮತ್ತೆ ಕುಶಾಲನಗರಕ್ಕೆ ಬಂದು ಮಧ್ಯಾನದ ಊಟ. ನಂತರ ಅಲ್ಲಿಯ ನಿಸರ್ಗಧಾಮಕ್ಕೆ ಭೇಟಿ. ಹೊಳೆಯಲ್ಲಿ ಮಿಂದು, ಸ್ವಲ್ಪ ವಿರಮಿಸುವಷ್ಟರಲ್ಲೇ ಸಂಜೆ. ಸುಮಾರು 5 ಗಂಟೆಗೆ ಕುಶಾಲನಗರ ಬಿಟ್ಟು ರಾತ್ರಿ ಹನ್ನೊಂದಕ್ಕೆಲ್ಲ ಮತ್ತೆ ಬೆಂಗಳೂರಿನ ಕಾಲ ಬಳಿ.

ಎರಡು ದಿನ-ಒಂದು ರಾತ್ರಿ-ಆರುನೂರು ಕಿಲೋಮೀಟರು-ಎರಡು ಬೈಕ್ ಗಳು-ನಾಲ್ಕು ಜನ........................... ನಿಜ ಹೇಳಬೇಕೆಂದರೆ, ರಾತ್ರಿ ರೂಮಿಗೆ ವಾಪಸ್ ಬರುವಷ್ಟರಲ್ಲೇ ನಮ್ಮ 'seat' ಗಳು ಸ್ಪರ್ಶ ಜ್ಞಾನವನ್ನೇ ಕಳೆದುಕೊಂಡು ಬಿಟ್ಟಿದ್ದವು. ಮಲಗಿದವರು ಎರಡು ದಿನ ಎದ್ದಿದ್ರೆ ಕೇಳ್ರಿ.........


1 comments:

Sandeep Shetty said...

ಚಳಿಯಾಗುತಿದೆ ಇಲ್ಲಿ

Post a Comment